

12th December 2024

ಪಂಚಮಸಾಲಿ ಸಮಾಜ ೨ ಎ ಮೀಸಲಾತಿ ಹೋರಾಟ; ಸಿಎಂ ಸಿದ್ದರಾಮಯ್ಯ ಬಹಿರಂಗವಾಗಿ ಕ್ಷಮೆಯಾಚಿಸಬೇಕು-ಶಾಸಕ ಜನಾರ್ಧನರೆಡ್ಡಿ
ಬಳ್ಳಾರಿ ಡಿ 12. ಬೆಳಗಾವಿಯಲ್ಲಿ ಪಂಚಮಸಾಲಿ ಸಮಾಜ ೨ ಎ ಮೀಸಲಾತಿಗಾಗಿ ನಡೆಸುತ್ತಿದ್ದ ಶಾಂತಿಯುತ ಹೋರಾಟದಲ್ಲಿ ಪಾಲ್ಗೊಂಡ ಜನತೆ ಮೇಲೆ ಬ್ರಿಟೀಷರ ಆಡಳಿತಕ್ಕೂ ಕೆಟ್ಟದಾಗಿ ಹಿರಿಯರು ಕಿರಿಯರು ಯನ್ನದೇ ಲಾಟಿಯಿಂದ ಇಚ್ಚೆ ಬಂದAತೆ ಹಲ್ಲೆ ಮಾಡಲಾಗಿದೆ. ಈ ಸರಕಾರ ಜನ ವಿರೋಧಿಯಾಗಿದೆ ಎಂದು ಮಾಜಿ ಸಚಿವ ಗಂಗಾವತಿ ಶಾಸಕ ಗಾಲಿ ಜನಾರ್ಧನರೆಡ್ಡಿ ಆರೋಪಿಸಿದ್ದಾರೆ. ಅವರು ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡುತ್ತಾ ಹೋರಾಟಗಾರರಿಗೆ ಸಮಾಧಾನ ಹೇಳುವುದು ಬಿಟ್ಟು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ತಾವು ಕರೆದರೆ ಜಯ ಮೃತ್ಯುಂಜಯ ಸ್ವಾಮಿಗಳು ಬಂದಿಲ್ಲ ವೆಂದು ಅವರನ್ನು ಮತ್ತು ಹೋರಾಟಕ್ಕೆ ಮುಂದಾಗಿದ್ದ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಸಿ. ಸಿ ಪಾಟೀಲ್, ಅರವಿಂದ ಬೆಲ್ಲದ್ ಮೊದಲಾದವರನ್ನು ಬಂಧನದಲ್ಲಿರಿಸಲಾಯಿತು ಎಂದು, ಶ್ಯಾಡಿಸ್ಟ್ ಎಡಿಜಿ ಅವರಿಗೆ ಮಾರ್ಗದರ್ಶನ ನೀಡಿ ಹೋರಾಟಗಾರರ ಮೇಲೆ ಈ ಹಲ್ಲೆ ನಡೆಸಿದ್ದಾರೆ ಎಂದು, ಇದರಲ್ಲಿ ೫೦ ಕ್ಕೂ ಹೆಚ್ಚು ಜನ ತೀವ್ರವಾಗಿ ಗಾಯಗೊಂಡಿದ್ದಾರೆ. ಈ ವಿಷಯದಲ್ಲಿ ಸಿದ್ದರಾಮಯ್ಯ ಅವರು ಕ್ಷಮೆಯಾಚಿಸಬೇಕು. ಇನ್ನುಮುಂದೆ ಯಾರು ಈ ರೀತಿ ಹೋರಾಟಕ್ಕೆ ಬರಬಾರದೆನ್ನುವ ಎನ್ನುವ ರೀತಿಯಲ್ಲಿ ಹಲ್ಲೆ ಮಾಡಿದ್ದಾರೆ ಎಂದರು. ಈ ಹೋರಾಟಕ್ಕೆ ಸಿಎಂ ಸರಿಯಾದ ರೀತಿಯಲ್ಲಿ ಸ್ಪಂದಿಸದಿದ್ದರೆ ಈ ಹೋರಾಟ ಇನ್ನೂ ತೀವ್ರಗೊಳ್ಳಲಿದೆ. ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಸಫಲವಾಗಲ್ಲ. ಮುಖ್ಯ ಮಂತ್ರಿಗಳು ಬಹಿರಂಗವಾಹಿ ಕ್ಷಮೆ ಕೇಳಿ , ಸಾಂತ್ವನ ಹೇಳಬೇಕೆಂದರು. ನಮ್ಮ ಪಕ್ಷ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ಹೋರಾಟಕ್ಕೆ ಸದಾ ಬೆಂಬಲವಾಗಿರಲಿದೆAದರು.
ಹನುಮಮಾಲೆ ಧರಿಸಿ ಬರುವ ವ್ಯಕ್ತಿಗಳಿಗೆ ಮೂರು ದಿನಗಳ ಕಾಲ ಪ್ರಸಾದ ವ್ಯವಸ್ಥೆ ಮಾಡಲಾಗುತ್ತಿದೆ. ಅಂಜನಾದ್ರಿ ಬೆಟ್ಟಕ್ಜೆ ಭೇಟಿ ನೀಡುವ ಭಕ್ತಾಧಿಗಳಿಗೆ ಸಕಲ ರೀತಿಯಲ್ಲಿ ವ್ಯವಸ್ಥೆ ಮಾಡುತ್ತಿದೆ ಎಂದು ತಿಳಿಸಿದರು.ಡಿ.೧೩ ರಂದು ಗಂಗಾವತಿಯಲ್ಲಿ ಸಂಕೀರ್ತನ ಱ್ಯಾಲಿ ನಡೆಯಲಿದೆ ಇದಕ್ಕೆ ಅನುಮತಿಯಿದ್ದು ೩೦ ಸಾವಿರ ಜನತೆ ಸೇರುವ ಸಾಧ್ಯತೆ ಇದೆ ಎಂದು ತಿಳಿಸಿದರು. ರಾಜ್ಯದ ವಿವಿಧಡೆಯಿಂದ ಲಕ್ಷಾಂತರ ಜನ ಸೇರಲಿದ್ದಾರೆಂದರು. ಸುದ್ದಿಗೋಷ್ಟಿಯಲ್ಲಿ ಪಕ್ಷದ ಜಿಲ್ಲಾ ಅಧ್ಯಕ್ಷ ಅನಿಲ್ ನಾಯ್ಡು, ಮುಖಂಡರುಗಳಾದ ಡಾ.ಎಸ್.ಜೆ.ವಿ.ಮಹಿಪಾಲ್, ಡಾ.ಬಿ.ಕೆ.ಸುಂದರ್, ಕೆ.ಆರ್.ಮಲ್ಲೇಶ್, ಅಡವಿ ಸ್ವಾಮಿ, ಶರಣ ಇನ್ನಿತರರು ಉಪಸ್ಥಿತರಿದ್ದರು.

ಕುರುಬ ಸಮುದಾಯದ ವಿರುದ್ದ ಹೇಳಿಕೆ ಖಂಡನೀಯ ಸಿ.ಸಿ.ಪಾಟೀಲ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು : ರುದ್ರಣ್ಣ ಗುಳಗುಳಿ

ಕಾಂಗ್ರೆಸ್ ಮಹಿಳೆಯರನ್ನು ಗ್ಯಾರಂಟಿಗೆ ಸಿಮೀತಗೊಳಿಸಿದೆ- ಬಿಜೆಪಿ ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ ಆರೋಪ

ಮಹಿಳಾ ಮೀಸಲಾತಿಗೆ ವಿರೋಧ: ಹೇಮಲತಾ ನಾಯಕ ಆಕ್ರೋಶ- ಸಾಮಾನ್ಯ ಮಹಿಳೆಯರಿಗೆ ಅಧಿಕಾರ:ಕಾಂಗ್ರೆಸ್ ಅಡ್ಡಿಪಡಿಸಿದೆ

2030ಕ್ಕೆ ಗದಗ ನಗರದಲ್ಲಿ ಸುಸಜ್ಜಿತವಾದ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ: ಎಚ್.ಕೆ. ಪಾಟೀಲ